Slide
Slide
Slide
previous arrow
next arrow

ವಿಟ್ನಾಳ ಶಾಲೆಯಲ್ಲಿ ವಿಠ್ಠಲ್ ಭಂಡಾರಿ ಜನ್ಮದಿನಾಚರಣೆ: ಬಿಸಿಯೂಟ ಸಾಮಗ್ರಿ ವಿತರಣೆ

300x250 AD

ದಾಂಡೇಲಿ:  ಬರಹಗಾರ, ಹೋರಾಟಗಾರ, ಲೇಖಕ, ಚಿಂತಕ ದಿ. ಡಾ. ವಿಠ್ಠಲ್ ಭಂಡಾರಿ ಜನ್ಮದಿನಾಚರಣೆ ಕಾರ್ಯಕ್ರಮವನ್ನು ತಾಲೂಕಿನ ವಿಟ್ನಾಳದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಚರಿಸಿದರು. 

ವಿಠ್ಠಲ್ ಭಂಡಾರಿಯವರ ಜನ್ಮದಿನಾಚರಣೆಯ ನೆನಪಲ್ಲಿ ವಿಟ್ನಾಳ ಶಾಲೆಯ 105 ವಿದ್ಯಾರ್ಥಿಗಳ ಬಿಸಿ ಊಟದ ಕಾರ್ಯಕ್ಕೆ ಅನುಕೂಲವಾಗುವಂತೆ  ಸ್ಟೀಲ್ ತಾಟು ಹಾಗೂ ಸ್ಟೀಲ್ ಲೋಟಗಳನ್ನು ವಿತರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ವಿಠ್ಠಲ್ ಭಂಡಾರಿಯವರು ತಮ್ಮ ವಿದ್ಯಾರ್ಥಿ,  ಯುವಜನರ ಹಲವಾರು ಸಮಸ್ಯೆಗಳಿಗಾಗಿ ರಾಜ್ಯದ್ಯಂತ ಹೋರಾಟ ನಡೆಸಿದವರು. ಗ್ರಾಮೀಣ ಕೃಪಾಂಕವೂ ಸೇರಿದಂತೆ ಹಲವಾರು ಸಮತೆ , ಸೌಹಾರ್ದತೆಯ ಸಂಗತಿಗಳಿಗಾಗಿ ಚಳುವಳಿ ರೂಪದಲ್ಲಿ ಕಾರ್ಯಕ್ರಮಗಳನ್ನು ಸಂಘಟಿಸಿದವರು. ಸಂವಿಧಾನ ಓದು ಕಾರ್ಯಕ್ರಮವನ್ನು ರಾಜ್ಯದಂತ ಹಮ್ಮಿಕೊಂಡು ಸವಿಂದಾನದ ಆಶಯಗಳನ್ನ ವಿದ್ಯಾರ್ಥಿ ಯುವಜನರಿಗೆ, ಸಾರ್ವಜನಿಕರಿಗೆ ತಲುಪಿಸುವಲ್ಲಿ ಪ್ರಯತ್ನಿಸಿದವರು. ಪ್ರಾಧ್ಯಾಪಕರಾಗಿ, ಲೇಖಕರಾಗಿ, ಸಂಘಟಕರಾಗಿ, ಹೋರಾಟಗಾರರಾಗಿ  ನಾಡಿನಾದ್ಯಂತ ಪರಿಚಿತರಾಗಿದ್ದ ವಿಠ್ಠಲ್  ಭಂಡಾರಿ ಇವತ್ತು ನಮ್ಮ ಜೊತೆ ಇಲ್ಲದಿರುವುದು ಈ ನಾಡಿನ ಸಾಂಸ್ಕೃತಿಕ ಚಳುವಳಿಗೆ ದೊಡ್ಡದಾದ ಹಾನಿಯನ್ನುಂಟು ಮಾಡಿದೆ. ವಿಠ್ಠಲ ಭಂಡಾರಿ  ಬುಡಕಟ್ಟು  ಕುಣಬಿ,  ಗೌಳಿಗಳ ಸಾಂಸ್ಕೃತಿಕ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಿದವರು. ಹಾಗಾಗಿ ಅವರ ನೆನಪಲ್ಲಿ ಬುಡಕಟ್ಟು ಗೌಳಿ ಸಮುದಾಯದ ವಿದ್ಯಾರ್ಥಿಗಳೇ ಹೆಚ್ಚಿಗೆ ಇರುವ ವಿಟ್ನಾಳ ಶಾಲೆಯ ವಿದ್ಯಾರ್ಥಿಗಳಿಗೆ ಬಿಸಿಯೂಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಸ್ಟೀಲ್  ತಾಟು ಹಾಗೂ ಲೋಟಗಳನ್ನು ನೀಡಲಾಗಿದೆ ಎಂದರು. 

ಯುವಜನ ಸಂಘಟನೆಯ ಮುಖಂಡ ಡಿ. ಸ್ಯಾಮಸನ್ ಮಾತನಾಡಿ  ವಿಠ್ಠಲ್ ಭಂಡಾರಿಯವರ ಜನ್ಮ ದಿನಾಚರಣೆಯ ಮೂಲಕ ಅವರ ಬದುಕು ಹಾಗೂ ಬರಹಗಳು ತಮಗೆಲ್ಲರಿಗೂ ಪ್ರೇರಣೆಯಾಗಲಿ ಎಂಬ ಕಾರಣಕ್ಕಾಗಿ ಈ ಕಾರ್ಯವನ್ನು ಮಾಡಲಾಗಿದೆ ಎಂದರು. 

300x250 AD

ಅಂಬೇವಾಡಿ ಗ್ರಾ.ಪಂ ಅಧ್ಯಕ್ಷ ಜಿ.ಇ. ಪ್ರಕಾಶ್ , ವಿಟ್ನಾಳ ಶಾಲಾ ಮುಖ್ಯಾಧ್ಯಾಪಕಿ ಚಂದ್ರಕಲಾ ಬಾಂದೇಕರ ಮಾತನಾಡಿ ವಿಠ್ಠಲ್ ಭಂಡಾರಿಯವರ ನೆನಪಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಸಹಾಯ ಮಾಡಿರುವ ಪ್ರೀತಿಪದದ  ಕಾರ್ಯ ಸ್ಮರಿಸುವಂತದ್ದು ಎಂದರು. 

ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ನಂದಿನಿ ಅವಣೆ,  ಯುವಜನ ಮುಖಂಡರಾದ ಇಮ್ರಾನ್ ಖಾನ್, ರಾಘವೇಂದ್ರ ಭಜಂತ್ರಿ, ಅಸ್ಲಾಂ ,  ಉಮೇಶ ಸಾವಳಗಿಮಠ, ಶಿಕ್ಷಕರಾದ ಮೀನಾ ಕುಡ್ತರಕರ, ಲಲಿತಾ ನಾಯ್ಕ,  ಪೂರ್ಣಿಮಾ ನಾಯ್ಕ ಮುಂತಾದವರಿದ್ದರು. ಶಿಕ್ಷಕ ಸುಭಾಷ ನಾಯಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top